ತೊಳೆಯು ಬಾ ಬಸವ

ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ
ಜನರ ಬುದ್ಧಿ ಭಾವ
ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ
ಶುದ್ಧ ಬುದ್ಧ ಬಸವ || ಪ ||

ಯಜ್ಞಯಾಗಗಳ ಪೂಜೆ ನೇಮಗಳ
ನೆಪದಲಿ ಜನರನು ಸುಲಿವ
ಪುರಾಣ ಶಾಸ್ತ್ರವ ಸುಳ್ಳು ಕಂತೆಗಳ
ಹೇಳುತ ಹೊಟ್ಟೆಯ ಹೊರೆವ || ೧ ||

ಪೂಜಾರಿ ವರ್ಗ ಬದುಕಿನ ಮಾರ್ಗ
ಎಂದು ಹಳಿದು ಅವರ
ಸರಳ ಸಂಬಂಧ ದೇವಭಕ್ತರಿಗೆ
ಕಲ್ಪಿಸಿದೆ ಉಳಿಸಿ ಜನರ || ೨ ||

ದಿನವಾರಗಳನು ಗ್ರಹ ತಾರೆಗಳನು
ಎಣಿಸುವ ಗುಣಿಸುವ ತಂತ್ರ
ಮೋಸವೆಂದೆ ಜ್ಯೋತಿಷ್ಯ ಶಾಸ್ತ್ರ
ಮೈಗಳೃ ಜನರ ಕುತಂತ್ರ || ೩ ||

ಶಿವನ ನೆನೆದು ದಿನ ರಾತ್ರಿ ಕಳೆಯುವಗೆ
ಪ್ರತಿಕ್ಷಣವು ಸುಮುಹೂರ್ತ
ಶಿವನನು ಎಲ್ಲೆಡೆ ಕಾಂಬ ಭಕ್ತರಿಗೆ
ಇಹವೆಲ್ಲ ಕರ್ಮ ಕರ್ತ || ೪ ||

ನೋವು ನಷ್ಟಗಳ ವ್ಯಾಧಿ ಬಾಧೆಗಳ
ಭಯವು ಹೆಚ್ಚಿನದು ಮರಣ
ಭಯವೆ ಮೌಢ್ಯತೆಗೆ ಮೂಲ ಭಕ್ತನಿಗೆ
ಮಹಾನವಮಿ ಆ ಮರಣ || ೫ ||

ಮೌಢ್ಯಶೋಷಣೆಯ ಮುಕ್ತ ಸಮಾಜವ
ನಿರ್ಮಿಸ ಬಯಸಿದೆ ನೀನು
ಮನುಜ ಮಹಿಮೆಯನು ಎತ್ತಿ ಹಿಡಿದ ನೀ
ಯುಗದ ಜಗದ ಭಾನು || ೬ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರುಳು
Next post ತುತ್ತೂರಿ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys